ಬೆಂಗಳೂರು
ಕೊಡುಗೈ ದಾನಿ ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಂ ಕೃಷ್ಣಪ್ಪ.
ಇತ್ತೀಚಿನ ದಿನಗಳಲ್ಲಿ ದಾನ ಮಾಡುವವರೇ ಕಣ್ಮರೆ ಆಗುತ್ತಿರುವ ಈ ಕಾಲದಲ್ಲಿ ತಮ್ಮ ವಿಧಸಭಾ ಕ್ಷೇತ್ರದಲ್ಲಿ ಕೊಡುಗೈ ದಾನಿಯಾಗಿ ಬಡ ಜನರಿಗೆ, ಬಡ ವಿದ್ಯಾರ್ಥಿಗಳಿಗೆ ಓದಲು, ಆಸ್ಪತ್ರೆಗೆ, ಬಡ ಚಾಲಕರಿಗೆ ವಾಹನ ಕೊಳ್ಳಲ್ಲು, ತಮ್ಮ ವೈಯಕ್ತಿಕ ಹಣವನ್ನು ದಾನ ಮಾಡುವ ಮೂಲಕ ಸಹಾಯ ಮಾಡುತ್ತ ಬಂದಿದ್ದಾರೆ. ಕೊಡುಗೈ ದಾನಿ ಬೆಂಗಳೂರಿನ ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಂ. ಕೃಷ್ಣಪ್ಪರವರು, ಇಂದು ಚನ್ನಪಟ್ಟಣ ತಾಲ್ಲೂಕಿನ, ಕೆಂಗಲ್ ಅಂಜನೇಯ್ಯ ಸ್ವಾಮಿ ದೇವಸ್ಥಾನದ ನೂತನ ರಥ ನಿರ್ಮಾಣ ಮಾಡಲು 34ಲಕ್ಷ ರೂಪಾಯಿಯ ಚೆಕ್ ಅನ್ನು ದೇಣಿಗೆಯಾಗಿ ದೇವಾಲಯದ ಆಡಳಿತ ಮಂಡಳಿ ಸದಸ್ಯರಿಗೆ ನೀಡಿದರು, ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.




