ಬೆಂಗಳೂರು
ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾದ ಎಂ ಕೃಷ್ಣಪ್ಪ ಅವರಿಂದ ರಸ್ತೆ ಡಾಂಬರೀಕರಣ ಕಾಮಗಾರಿ ಪೂಜೆ.
Date16/10/2025, ಗುರುವಾರ. ಬೆಂಗಳೂರು.
ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳದ್ದೆ ಸವಾರರಿಗೆ ತಲೆಬಿಸಿ ಆಗಿದೆ, ಇದಕ್ಕೆಲ್ಲ ಒಂದು ಹಂತದ ಅಂತ್ಯ ಕಾಣಿಸಲು ವಿಜಯನಗರದ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಂ ಕೃಷ್ಣಪ್ಪ ಅವರು ತ್ವರಿತವಾಗಿ ಸಮಸ್ಯೆ ಬಗೆಹರಿಸಲು ಹಂತ ಹಂತವಾಗಿ ಸರ್ಕಾರದಿಂದ ಅನುದಾನ ತಂದು ಸಮಸ್ಯೆಯನ್ನು ಬಗೆಹರಿಸಲು ಪಣ ತೊಟ್ಟಿದ್ದಾರೆ, ಇದರ ಭಾಗವಾಗಿ ನಾಳೆ ದಿನಾಂಕ 17/10/2025 ರಂದು ಅತ್ತಿಗುಪ್ಪೆ ವಾರ್ಡ್ ನಂಬರ್ -150 ರ ರಸ್ತೆ ಡಾಂಬರೀಕರಣ ಕಾಮಗಾರಿ ಪೂಜೆ ನೆರವೇರಿಸಲಿದ್ದಾರೆ.




