ಕಾರ್ಮಿಕರ ಸುದ್ದಿ
ಕೌಶಲ್ಯ ತರಬೇತಿ ಸಂಸ್ಥೆ ಮತ್ತು ಕನಿಷ್ಠ ವೇತನ ಜಾರಿ ಕುರಿತ : ಸಚಿವ ಸಂತೋಷ್ ಲಾಡ್ ಸಭೆ*
ಬೆಂಗಳೂರು, 2025 ಡಿಸೆಂಬರ್ 1: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಧಾರವಾಡ ಮತ್ತು ಮೈಸೂರಿನಲ್ಲಿ ಆರಂಭಿಸಲು ಉದ್ದೇಶಿಸಿರುವ ಕೌಶಲ್ಯ ತರಬೇತಿ ಸಂಸ್ಥೆಗಳ ಕುರಿತು ವಿಕಾಸಸೌಧದಲ್ಲಿ ನಡೆದ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಅನ್ನು ವೀಕ್ಷಿಸಿದ ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಅವರು, ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಕನಿಷ್ಠ ವೇತನ ಮಂಡಳಿಯ ಅಧ್ಯಕ್ಷರಾದ ಶಕೀಲ್ ಶ್ರೀ ಅವರು ಉಪಸ್ಥಿತರಿದ್ದರು.*ಕನಿಷ್ಠ ವೇತನ ಜಾರಿ ಕುರಿತ ಸಭೆ* ಕಾರ್ಮಿಕ ಸಚಿವರಾದ ಸಂತೋಷ್ ಅವರು ವಿಕಾಸಸೌಧದಲ್ಲಿ ಕನಿಷ್ಠ ವೇತನ ಜಾರಿ ಕುರಿತ ಸಭೆ ನಡೆಸಿದರು.ಈ ಸಭೆಯಲ್ಲಿ ಕಾರ್ಮಿಕ ಆಯುಕ್ತರಾದ ಡಾ. ಎಚ್ ಎನ್ ಗೋಪಾಲಕೃಷ್ಣ. ಜಂಟಿ ಕಾರ್ಮಿಕ ಆಯುಕ್ತರಾದ ಡಾ. ರವಿಕುಮಾರ್, ಕನಿಷ್ಠ ವೇತನ ಮಂಡಳಿಯ ಅಧ್ಯಕ್ಷರಾದ ಶಕೀಲ್ ಶ್ರೀ ಅವರು ಉಪಸ್ಥಿತರಿದ್ದರು.

